ಗೆಳತಿ, ನೀನಾದರೆ ಸನಿಹ

ಗೆಳತಿ, ನೀನಾದರೆ ಸನಿಹ
ಮೂಡುವುದು ಕವಿತೆ
ಇಲ್ಲವಾದರೆ ಕತೆ
ಆರಿಸಿಕೊ ನಿನಗ್ಯಾವುದು ಇಷ್ಟ
ಬೇಡ ನನ್ನ ಚಿಂತೆ
ನನಗಿರುವಾಗ ನಿನ್ನ ಚಿಂತೆ /ಪ//

ನನ್ನ ಪ್ರೀತಿ ಅಚಲ
ಇರಬಹುದು ಅದು ಹಿಮಾಚಲ
ಇದಕೆ ಬೇಕಿಲ್ಲ ಸಮರ್ಥನೆ
ಮಾಡಿದರೂ ನೀ ನಿರಾಕರಣೆ
ನೀನು ಬದುಕಬೇಕು
ಬದುಕಿ ಬಾಳಬೇಕು
ಇದು ನನ್ನ ಹರಕೆ
ಪ್ರೀತಿ ಕಾವ್ಯದ ಅರಿಕೆ

ಗೊತ್ತು, ಬದುಕು ಕಡಲು
ಹೆಬ್ಬಲೆಗಳು ಅದರ ಒಡಲು
ಆದರೆ ನಾನು ನಡುಗಡ್ಡೆ
ನಿನಗೆ ಎಂದಾದರೂ ತಂಗಲು
ಹೃದಯವಿರುವ ನೀನು
ಹೃದಯವನ್ನು ಬಲ್ಲೆ
ಇಷ್ಟೆ, ಸಾಕು ಇಲ್ಲಿ
ಮಾತು, ಸಮಾಜಕಿರಲಿ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿರು ಎಲೆಯಲಿ
Next post ಚಿತ್ರರಂಗ : ಹೊಸಗಾಳಿಯ ವ್ಯಾಖ್ಯಾನ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys